ಕೊಳೆತ ಬೀಜವ ಯಾರು ಬಿತ್ತುವುದಿಲ್ಲ
ಅತ್ತದ ಕೂಳಿಗೆ ನೀರ ನೆರೆಯುವುದಿಲ್ಲ
ಸಂಪಾದನೆ ಇಲ್ಲದೆ ಸಾಲ ಹುಟ್ಟುವುದಿಲ್ಲ
ಸುಖ ವಿಲ್ಲದೆಡೆ ಯಾರು ಸೇರುವುದಿಲ್ಲ
ನಿನ್ನೊಳಗಿನ ಮುಗ್ಧತೆ ಹೊಟ್ಟೆ ತುಂಬಿಸುವುದಿಲ್ಲ
ನಿನ್ನಲಿ ಏನು ಇಲ್ಲದಿದ್ದರೆ ಜನ ಬರಿ ಮಾತನಾಡಿಸುವುದು ಇಲ್ಲಾ
ನೀನು ಸತ್ತಾಗ ಪಿಂಡ ಇಡುವುದಿಲ್ಲ
ಇಟ್ಟರು ಸಹ
ಆಗ ಕಾಗೆ ಗಳು ಬರುವುದಿಲ್ಲ...........
Wednesday, 17 November 2010
ನದಿ
ಕಾಣದ ಕಡಲಿನ ಒಡಲನು ಸೇರಲು
ನದಿಯು ಹರಿದಿದೆ ,
ಸೇರಲು ತೀರವ ದಾರಿಯ ಕಾಣದೆ
ಸುಮ್ಮನೆ ಹರಿದಿದೆ ,
ಕಾಣದ ಕಡಲನು ಸೇರುವ ತವಕದಿ
ದುಮ್ಮಿಕ್ಕಿ ಹರಿದಿದೆ ,
ಜುಳು ಜುಳು ನಾದವ ಮಾಡುತ ಹರ್ಷದಿ
ಬೋರ್ಗರೆಯುತ ಸಾಗಿದೆ,
ಕಾಡು-ಮೇಡು ಮಲೆಯ-ಮಾರುತ ಬಯಲಲಿ ಸಾಗಿದೆ
ಎಲ್ಲೂ ನಿಲ್ಲದೆ ,
ಕನಸಿನ ಕಡಲನು ಹುಡುಕುತ ಸಾಗಿದೆ
ಕಡಲಿನ ಒಡಲನು ಸೇರಲು ,
ಹರಿದ ದಾರಿಯ ತುಂಬೆಲ್ಲ ಭೂರಮೆಯ
ಹಸಿರು ಮಾಡಿದೆ
ಜೀವ ಸಂಕುಲಗಳಿಗೆ ಅಮ್ಬ್ರುತ ಉಣಿಸಿ
ಜೀವನ ನೀಡಿದೆ
ಬದುಕನು ನೀಡಿದೆ ಉಸಿರನು ನೀಡಿದೆ
ಕಡಲ ಓಡಲ ಸೇರುವ ತವಕದಿ
ಎಲ್ಲಿಯೂ ನಿಲ್ಲದೆ ನಿಂತ ನೀರಾಗದೆ
ನದಿಯು ಹರಿದಿದೆ ,
ಸೇರಲು ತೀರವ ದಾರಿಯ ಕಾಣದೆ
ಸುಮ್ಮನೆ ಹರಿದಿದೆ ,
ಕಾಣದ ಕಡಲನು ಸೇರುವ ತವಕದಿ
ದುಮ್ಮಿಕ್ಕಿ ಹರಿದಿದೆ ,
ಜುಳು ಜುಳು ನಾದವ ಮಾಡುತ ಹರ್ಷದಿ
ಬೋರ್ಗರೆಯುತ ಸಾಗಿದೆ,
ಕಾಡು-ಮೇಡು ಮಲೆಯ-ಮಾರುತ ಬಯಲಲಿ ಸಾಗಿದೆ
ಎಲ್ಲೂ ನಿಲ್ಲದೆ ,
ಕನಸಿನ ಕಡಲನು ಹುಡುಕುತ ಸಾಗಿದೆ
ಕಡಲಿನ ಒಡಲನು ಸೇರಲು ,
ಹರಿದ ದಾರಿಯ ತುಂಬೆಲ್ಲ ಭೂರಮೆಯ
ಹಸಿರು ಮಾಡಿದೆ
ಜೀವ ಸಂಕುಲಗಳಿಗೆ ಅಮ್ಬ್ರುತ ಉಣಿಸಿ
ಜೀವನ ನೀಡಿದೆ
ಬದುಕನು ನೀಡಿದೆ ಉಸಿರನು ನೀಡಿದೆ
ಕಡಲ ಓಡಲ ಸೇರುವ ತವಕದಿ
ಎಲ್ಲಿಯೂ ನಿಲ್ಲದೆ ನಿಂತ ನೀರಾಗದೆ
Subscribe to:
Posts (Atom)

