Search This Blog

Wednesday, 17 November 2010

ತಿಳಿದ ಸತ್ಯ

ಕೊಳೆತ ಬೀಜವ ಯಾರು ಬಿತ್ತುವುದಿಲ್ಲ
ಅತ್ತದ ಕೂಳಿಗೆ ನೀರ ನೆರೆಯುವುದಿಲ್ಲ
ಸಂಪಾದನೆ ಇಲ್ಲದೆ ಸಾಲ ಹುಟ್ಟುವುದಿಲ್ಲ
ಸುಖ ವಿಲ್ಲದೆಡೆ ಯಾರು ಸೇರುವುದಿಲ್ಲ
ನಿನ್ನೊಳಗಿನ ಮುಗ್ಧತೆ ಹೊಟ್ಟೆ ತುಂಬಿಸುವುದಿಲ್ಲ
ನಿನ್ನಲಿ ಏನು ಇಲ್ಲದಿದ್ದರೆ ಜನ ಬರಿ ಮಾತನಾಡಿಸುವುದು ಇಲ್ಲಾ
ನೀನು ಸತ್ತಾಗ ಪಿಂಡ ಇಡುವುದಿಲ್ಲ
ಇಟ್ಟರು ಸಹ
ಆಗ ಕಾಗೆ ಗಳು ಬರುವುದಿಲ್ಲ...........

ನದಿ

ಕಾಣದ ಕಡಲಿನ ಒಡಲನು ಸೇರಲು
ನದಿಯು ಹರಿದಿದೆ ,
ಸೇರಲು ತೀರವ ದಾರಿಯ ಕಾಣದೆ
ಸುಮ್ಮನೆ ಹರಿದಿದೆ ,
ಕಾಣದ ಕಡಲನು ಸೇರುವ ತವಕದಿ
ದುಮ್ಮಿಕ್ಕಿ ಹರಿದಿದೆ ,
ಜುಳು ಜುಳು ನಾದವ ಮಾಡುತ ಹರ್ಷದಿ
ಬೋರ್ಗರೆಯುತ ಸಾಗಿದೆ,
ಕಾಡು-ಮೇಡು ಮಲೆಯ-ಮಾರುತ ಬಯಲಲಿ ಸಾಗಿದೆ
ಎಲ್ಲೂ ನಿಲ್ಲದೆ ,
ಕನಸಿನ ಕಡಲನು ಹುಡುಕುತ ಸಾಗಿದೆ
ಕಡಲಿನ ಒಡಲನು ಸೇರಲು ,
ಹರಿದ ದಾರಿಯ ತುಂಬೆಲ್ಲ ಭೂರಮೆಯ
ಹಸಿರು ಮಾಡಿದೆ
ಜೀವ ಸಂಕುಲಗಳಿಗೆ ಅಮ್ಬ್ರುತ ಉಣಿಸಿ
ಜೀವನ ನೀಡಿದೆ
ಬದುಕನು ನೀಡಿದೆ ಉಸಿರನು ನೀಡಿದೆ
ಕಡಲ ಓಡಲ ಸೇರುವ ತವಕದಿ
                                                               ಎಲ್ಲಿಯೂ ನಿಲ್ಲದೆ ನಿಂತ ನೀರಾಗದೆ