Search This Blog

Wednesday, 29 December 2010

ಒಂದಾಗುವ

ಭೂಮಿ ದುಂಡಗಿದೆ
ಮತ್ತೆ,
ಬೇಟಿಯಾಗುವ.....?
ಕಡೆಗೆ,
ಪಕ್ಕದ ಗೋರಿಯಲ್ಲಿ.......!
ಇಲ್ಲಾ,
ಒಂದಾಗುವ....ಬೂದಿಯಾಗಿ.....
ಪಶ್ಚಿಮ ವಾಹಿನಿಯ
ಕಾವೇರಿ ಮಡಿಲಿನಲ್ಲಿ .......
ನೀನು ಬೂದಿಯಾಗಿ ...
ನಾನು ಮಣ್ಣಾಗಿ ......
ಅಥವಾ!?
ನೀನು ಮಣ್ಣಾಗಿ ..........
ನಾನು ಬೂದಿಯಾಗಿ .....
ಪಂಚ ಬೂತ ಗಳಲ್ಲಿ ಲೀನವಾಗುವ.!
ಮತ್ತೆ ಬೇಟಿಯಾಗುವ ?


ಇನ್ನೆಲ್ಲೋ ?
ಇನ್ನ್ಯಾವ ರೂಪದಲ್ಲೋ ?
ಮತ್ತೆ ,
ಸೇರುವ ಭರವಸೆ ಯೊಂದಿಗೆ....?
ಇಂತಿ,
ನಿನ್ನ ಪ್ರೀತಿಯ
                  -ಜೆ

ನೀನು-ನಾನು

ಕಣ್ಣಿಗೆ ಚುಚ್ಚಿದ ಕಸದಂತೆ ನೀನು.
ನಗಲಾರೆ ಅಳಲಾರೆ,
ಸುಮ್ಮನೆ ನಗಬೇಕು.
ಮೌನವಾಗಿ ಅಳಬೇಕು.
ನಿನ್ನ ನೆನೆಯುವುದಿಲ್ಲ,
ಆದರೂ ಮರೆತಿಲ್ಲ.
ಸಿಕ್ಕರೂ ನೀನು,
ಹುಡುಕುವುದಿಲ್ಲ ನಾನು.

Wednesday, 17 November 2010

ತಿಳಿದ ಸತ್ಯ

ಕೊಳೆತ ಬೀಜವ ಯಾರು ಬಿತ್ತುವುದಿಲ್ಲ
ಅತ್ತದ ಕೂಳಿಗೆ ನೀರ ನೆರೆಯುವುದಿಲ್ಲ
ಸಂಪಾದನೆ ಇಲ್ಲದೆ ಸಾಲ ಹುಟ್ಟುವುದಿಲ್ಲ
ಸುಖ ವಿಲ್ಲದೆಡೆ ಯಾರು ಸೇರುವುದಿಲ್ಲ
ನಿನ್ನೊಳಗಿನ ಮುಗ್ಧತೆ ಹೊಟ್ಟೆ ತುಂಬಿಸುವುದಿಲ್ಲ
ನಿನ್ನಲಿ ಏನು ಇಲ್ಲದಿದ್ದರೆ ಜನ ಬರಿ ಮಾತನಾಡಿಸುವುದು ಇಲ್ಲಾ
ನೀನು ಸತ್ತಾಗ ಪಿಂಡ ಇಡುವುದಿಲ್ಲ
ಇಟ್ಟರು ಸಹ
ಆಗ ಕಾಗೆ ಗಳು ಬರುವುದಿಲ್ಲ...........

ನದಿ

ಕಾಣದ ಕಡಲಿನ ಒಡಲನು ಸೇರಲು
ನದಿಯು ಹರಿದಿದೆ ,
ಸೇರಲು ತೀರವ ದಾರಿಯ ಕಾಣದೆ
ಸುಮ್ಮನೆ ಹರಿದಿದೆ ,
ಕಾಣದ ಕಡಲನು ಸೇರುವ ತವಕದಿ
ದುಮ್ಮಿಕ್ಕಿ ಹರಿದಿದೆ ,
ಜುಳು ಜುಳು ನಾದವ ಮಾಡುತ ಹರ್ಷದಿ
ಬೋರ್ಗರೆಯುತ ಸಾಗಿದೆ,
ಕಾಡು-ಮೇಡು ಮಲೆಯ-ಮಾರುತ ಬಯಲಲಿ ಸಾಗಿದೆ
ಎಲ್ಲೂ ನಿಲ್ಲದೆ ,
ಕನಸಿನ ಕಡಲನು ಹುಡುಕುತ ಸಾಗಿದೆ
ಕಡಲಿನ ಒಡಲನು ಸೇರಲು ,
ಹರಿದ ದಾರಿಯ ತುಂಬೆಲ್ಲ ಭೂರಮೆಯ
ಹಸಿರು ಮಾಡಿದೆ
ಜೀವ ಸಂಕುಲಗಳಿಗೆ ಅಮ್ಬ್ರುತ ಉಣಿಸಿ
ಜೀವನ ನೀಡಿದೆ
ಬದುಕನು ನೀಡಿದೆ ಉಸಿರನು ನೀಡಿದೆ
ಕಡಲ ಓಡಲ ಸೇರುವ ತವಕದಿ
                                                               ಎಲ್ಲಿಯೂ ನಿಲ್ಲದೆ ನಿಂತ ನೀರಾಗದೆ

Thursday, 14 October 2010

ಗೊತ್ತಿಲ್ಲ

ನನ್ನ ಕೆಂಪಾದ ಕಣ್ಣುಗಳ ಕಂಡರೆ
ಮುಗ್ದ ಅನಕ್ಷರಸ್ತ ಅಮ್ಮನಿಗೋ ದಿಗಿಲು
ಅಪ್ಪನದು ಮೌನದಲಿ ದೀನ ನೋಟ
ತಮ್ಮಂದರಿಗೆ ದೈರ್ಯವಿಲ್ಲ ಪ್ರಶ್ನೆ ಮಾಡಲು
ತಂಗಿಯೋ ಹಟಕ್ಕೆ ಬಿದ್ದವಳಂತೆ
ಜಾಸುಸಿ ನಡೆಸುತ್ತಾಳೆ ಬುದ್ದಿವಂತಳಂತೆ
ಸ್ನೇಹಿತರೋ ರಾತ್ರಿ ನಿದ್ರೆ ಇಲ್ವಾ ಅಂತಾರೆ
ಇವರೊಳಗಿನ ಒಂದೇ ಪ್ರಶ್ನೆ
ಇವನ ಕಣ್ಣೇಕೆ ಕೆಂಪಗೆ
ಇವ ಕುಡಿತಾನ ಕುಡಿಯೋಕೆ ರೊಕ್ಕ ಎಲೈತ್ರಿ
ಇವ ಬಿಕಾರಿ ಅದಾನ
ಕಂಡಿಲ್ಲ ಕೇಳಿಲ್ಲ ಅನ್ನೋ ಸಮಜಾಯಿಸಿ
ನನಗೂ ಗೊತ್ತು ನನ್ನ ಕಣ್ಣು ಕೆಂಪಾಗಿವೆ
ಆದರು ರಕ್ತ ಸೋರುವುದಿಲ್ಲ
ನನ್ನೊಬ್ಬನಿಗೆ ಮಾತ್ರ ಗೊತ್ತು
ನನ್ನ ಕೈ ಗಳಿಗೆ ಗೊತ್ತು
ನನ್ನ ಕರವಸ್ತ್ರ ಗಳಿಗೆ ಗೊತ್ತು
ನನ್ನ ತೋಳು ಗಳಿಗೆ ಗೊತ್ತು
                                                            ಅವಳ ನೆನೆಸಿ ಕೊಂಡಾಗ 
                                                            ನನ್ನ ಕಣ್ಣುಗಳು ಕೆಂಪಾಗುತ್ತವೆ ಎಂದು
                                                                 ಕಣ್ಣ ರಪ್ಪೆಗಳಿಗೂ ಗೊತ್ತು
                                                                 ಇದು ಅವಳಿಗಾಗಲಿ, ನನ್ನವರಿಗಾಗಲಿ
                                                                 ಗೊತ್ತಿಲ್ಲ...............

ಹೇ ಭಗವಂತ !

ಹೇ ಭಗವಂತ !
ಸರ್ವ ಶಕ್ತನು ನೀನು
ಸರ್ವ ವ್ಯಾಪಕನು   ನೀನು
ಗುಬ್ಬಿಯ ಮೇಲೆ ಬ್ರಮ್ಹಾಸ್ತ್ರ ಬಿಟ್ಟವನು ನೀನು
ಜೀವನದ ಚೆದುರಂಗ ದಾಟದಲಿ ಎದುರಾಳಿ ನೀನು
ಸಮಸ್ಯೆ ಯಾ ನಡೆ ನಡೆಸುವನು ನೀನು
ಪರಿಹಾರ ನಡೆಯ ನಡೆಸುವನು ನಾನು
ಸೋಲುವೆ ನೆಂಬ ಭಯಕ್ಕೆ ಎಲ್ಲಾ ಕಾಮನೆ ಕೊಟ್ಟವನು ನೀನು
ಗೆಲ್ಲುವೆ ನೆಂಬ ಹಟಕ್ಕೆ ಎಲ್ಲವನ್ನು ಉಂಡವನು ನಾನು
 ಸೋಲುವೆ ನೆಂಬ ಭಯವಾದರೆ
                                                        ಗುಟುಕು ಕುಡಿ ಅಮ್ಬ್ರುತವನ್ನು
                                                        ಗೆಲ್ಲಲಾಗುವುದಿಲ್ಲ ನನ್ನ ನೀನು
                                                        ಸೋಲು ನಿನಗೆ ಖಚಿತ ವಾದರೆ ಬಿಡು
                                                        ನನಗೆ ಕಟ್ಟ ಕಡೆಯ ಸಾವಿನ ಕಾಯನ್ನು
                                                        ಸಾವಲ್ಲು ಸೋಲುವುದಿಲ್ಲ ನಾನು
                                                        ಮುಂದಿನ ಆಟ ಸ್ವರ್ಗದಲ್ಲೋ ,ನರಕದಲ್ಲೋ ,
                                                        ಮುಂದಿನ ಜನ್ಮದಲ್ಲೋ , ನೀನೇ ನಿರ್ಧರಿಸು
                                                        ಅಲ್ಲಿಯೂ ನಿನ್ನ ಎದುರಿಸಲು ಸಿದ್ದ ವಾಗಿರುವೆ ನಾನು

Sunday, 5 September 2010

ಕಡೇಪಕ್ಷ

ಪ್ರೀತಿಯ ಅಲೆಮಾರಿ ಓದುಗರೆ (ಕ್ಷಮೆ ಇರಲ್ಲಿ)

ನೀವು ನನ್ನ ಬರವಣಿಗೆಗೆ ಅಭಿಪ್ರಾಯ ಬರೆಯಲು ಆಗುವುದಿಲ್ಲ ,ಸಾಧ್ಯವಿಲ್ಲ ,ಕಷ್ಟವಾಗುತ್ತದೆ ,ಸಮಯವ್ಯರ್ಥವಾಗುತ್ತದೆ ,ಎಂದ್ದೆಲ್ಲಎಣಿಸಿದ್ದರೆ
ಪರವಾಗಿಲ್ಲ ಕಡೇಪಕ್ಷ ನನ್ನ ಬರವಣಿಗೆಯ ಕೆಳಗೆ ಇರುವ ಪ್ರತಿಕ್ರಿಯೆಗಳಿಗೆ 
(funny,interesting,cool) ಕ್ಲಿಕ್  ಮಾಡಿ ನಿಮ್ಮ ಅಭಿಪ್ರಾಯ ತಿಳಿಸಬಹುದಲ್ಲವೇ?
ಅದು ಇಷ್ಟ ವಾಗಲಿಲ್ಲವಾದರೆ ಬೇಜಾರಿಲ್ಲ ನೀವು ಬೇಟಿ ಕೊಟ್ಟಿದ್ದೀರ
ನನ್ನ ಬರವಣಿಗೆ ಮೇಲೆ ಕಣ್ಣ ಆಡಿಸಿದ್ದೀರ ಅದೇ ಸಂತೋಷ
ಅಸ್ಟೆ ಸಾಕು ಇನ್ನೇನು ಬೇಕು ನನಗೆ ನಿಮ್ಮಿಂದ ಹೆಚ್ಚೇನು ನಿರಿಕ್ಷಿಸಲಾರೆ
                                                                          -jay

ಈಗ ನೋಡು

ಅಂಥವರ ಮಗಳಾಗ ಬಾರದಿತ್ತು.
ಇಂಥವರ ಒಡಹುಟ್ಟ ಬಾರದಿತ್ತು.
ಬಡವರ ಮನೆಯ ಹೂವಾಗ ಬೇಕಿತ್ತು.
ಅಂಗವಿಕಲೆ ಯಾಗಬೇಕಿತ್ತು.
ಪೆದ್ದಿ ಯಾಗಬೇಕಿತ್ತು.
ನೀನು ದೊಡ್ಡವಳಾಗ ಬಾರದಿತ್ತು.
ಚಂದವಿರ ಬಾರದಿತ್ತು.
ಅನಾಥೆ ಯಾಗಬೇಕಿತ್ತು.
ಬೇಗ ಸಾಯುವ ಕಾಯಿಲೆ ಇರಬೇಕಿತ್ತು.
ಗೊತ್ತು -ಗುರಿ ಇರಬಾರದಿತ್ತು.
ಜಾತಿ ಹೀನರ ಮನೆಯ ಜ್ಯೋತಿ ನೀನಾಗ ಬೇಕಿತ್ತು.
ನೀನು ಸತ್ತು ಹೋಗಿದ್ದರೆ ಚಂದವಿತ್ತು
ಎದುರಿಸುವ ಗುಣ ಇರಬೇಕಿತ್ತು.
ನನ್ನ ಪ್ರೀತಿ ನಿನಗೆ ಅರ್ಥ ಆಗಬೇಕಿತ್ತು.
                                                                                     ನೀನು ನನಗೆ ಸಿಗಬೇಕಿತ್ತು.
                                                                                     ಈಗ ನೋಡು ನಾನು ....!?
                                                                                                               -jay

Thursday, 12 August 2010

ಹುಡುಕಿ

ಪ್ರಿಯ ಅಲೆಮಾರಿ ಓದುಗ ರೆ (ಕ್ಷಮೆ ಇರಲಿ) !


ನೀವು ನನ್ನ ಬ್ಲಾಗ್ ಹುಡುಕಲು ಸಹಾಯ ಮಾಡಲು ಇಚ್ಚಿಸುತ್ತೇನೆ.

ನನ್ನ ಬ್ಲಾಗ್ ವಿಳ್ಳಾಸ http://www.jsmruti.blogspot.com 

( ಅಥವಾ  http://www.google.com  ಗೆ ಬೇಟಿ ಕೊಟ್ಟು jsmruti ಅಂತ

type ಮಾಡಿದ್ರೆ SMRUTI ಅನ್ನೋ hedding ಕಾಣಿಸುತ್ತದೆ.)

ಅದರ ಮೇಲೆ ಕ್ಲಿಕ್ಕಸಿದರೆ ಸಾಕು.

* ನೀವು ನನ್ನ ಗುಡಿಸಿಲಿನ ಮುಂದೆ ಇರುತ್ತೀರಿ. *
                                                         -jay

ಚಂದಮಾಮ


ಮೆಲ್ಲಗೆ ಬಾರೋ ಚಂದಮಾಮ .
ಕತ್ತಲೆಯ ದೂರ ಮಾಡಿ ,
ನನ್ನ ಪ್ರಿಯ ಸಖಿ ಮಲಗಲಿ ಹಾಯಾಗಿ ,
ನಿನ್ನ ಬಳಿ ನಾನೇ ಇರುವೆ,
ನಿನಗೆ ಕಾವಲಾಗಿ  ನಾನು.
ಮುಗಿಲನ್ನೆ ಕೇಳು ನೀನು,
ಹಾಸಿಗೆಯ ಮಾಡಿಕೊಡುವೆ.
ಸುಮ್ಮನೆ ಒಮ್ಮೆ ಹೇಳು ಸಾಕು,
ನಕ್ಷತ್ರಗಳ ತಂದು ಶೃಂಗರಿಸುವೆ.
ಮೆಲ್ಲಗೆ ಬಾರೋ ಚಂದಮಾಮ,
ಕತ್ತಲೆಯ ದೂರ ಮಾಡಿ.
ಕನಸುಗಳೇ ಬನ್ನಿ ನೀವು,
ಒಬ್ಬೊಬ್ಬರಾಗಿ ನನ್ನವಳ ನಗಿಸಿ.
ನಿದಿರಾ ದೇವಿ ನೀವು ಬಂದು,
ಇವಳ ಹರಸಿ ಹೋಗಿರಿ.
ಮೆಲ್ಲಗೆ ಬಾರೋ ಚಂದಮಾಮ .
ಕತ್ತಲೆಯ ದೂರ ಮಾಡಿ
                         - jay

Saturday, 24 July 2010

ಮನವಿ

ಅಲೆಮಾರಿ ಓದುಗ ! (ಕ್ಷಮೆ ಇರಲಿ )




ನಿಮ್ಮ ಅಲೆದಾಟ ಹುಡುಕಾಟಕ್ಕೆ ಕೊನೆಎಲ್ಲಿ ? ಇದು ನಿರಂತರ ನಿಮ್ಮ ಪ್ರತಿ ಕ್ಷಣಕ್ಕೂ ಬೆಲೆ ಇದೆ. ತಿಂಗಳಿಗೊಮ್ಮೆ ನನ್ನ ಪುಟ್ಟ ಗುಡಿಸಲಿನ ಜಗುಲಿಯ ಮೇಲೆ ಕುಳಿತು ನನ್ನ  ಗುಡಿಸಲನ್ನೊಮ್ಮೆ ಇಣುಕಿ,     ಉಸಿರು ಕಟ್ಟಿಸುವುದಿಲ್ಲವಾದರೆ ಸಂತೋಷ  ನೀವು ನನ್ನ ಗುಡಿಸಿಲ  ಹತ್ತಿರ ಬರುವುದೇ ಒಂದು ಆನಂದ ನಾನು ನಿಮಗೆ ಮೃಷ್ಟಾನ್ನ ಬಡಿಸಲು ಆಗದಿರಬಹುದು ಆದರೆ ಹಿಡಿ ಅವಲ್ಲಕ್ಕಿಯನ್ನು ಪ್ರೀತಿ ಇಂದ ಕೊಡಬಲ್ಲೆ. ನನ್ನ ನೆನಪು ಬಂದಾಗ ಒಮ್ಮೆ ಇತ್ತ ಬನ್ನಿ ನಾನು ಕಾಯುವೆ ನಾನಿಲ್ಲ ದಿದ್ದರು ನನ್ನ ಗುಡಿಸಲ ಜಗುಲಿಯಲ್ಲಿ ನೀವು ಕೂರಲು ಜಾಗವಿದೆ.



ಅವಲಕ್ಕಿ ಸಿಕ್ಕದಿದ್ದರೂ .............
    
                                              -jay

ನೀ ..... ?



ನೀ ..... ?

 ನಾನು  ನಿನ್ನ ಹಿಂದೆ

ನೀನು !? ನನ್ನ ಮುಂದೆ

ನೀನು ನನ್ನ ಕನಸು.

ನೀನು ನನ್ನ ಯಶಸ್ಸು.

ನೀನು ನನ್ನ ಸರ್ವಸ್ವ.

ನೀನು ನನ್ನ ಸಾರ್ಥಕತೆ.

ನೀನು ನನ್ನ ಬೆಳಕು .

 ನೀನು ತುಂಬಿರುವೆ ನನ್ನೊಳಗೆ.

ನೀನು ಅವರಿಸಿರುವೆ ನನ್ನನೇ.

ನೀನು ಇದ್ದರೆ ನಾನು.

ನಾನು ಅಂದರೆ ಅದು ನೀನೆ... !?

                                        -JAY

ನೀನು, ನಿನ್ನ, ನೀನೆ, ? (ಅಂದರೆ =ಪ್ರೀತಿ, ಪ್ರೇಮ, ಗುರಿ, ಬದುಕು, ಅವನು, ಅವಳು, ಸ್ಫೂರ್ತಿ, ಆರೋಗ್ಯ, ಸಂಪತ್ತು, ನಂಬಿಕೆ, ಆತ್ಮವಿಶ್ವಾಸ, ಛಲ, ಉತ್ಸಾಹ..... ಇರಬಹುದೇ)

Friday, 23 April 2010

ಅಸಹಾಯಕ


ಓದಲು ಸಾದ್ಯ ವಾಗದಿದ್ದರೆ ಪುಟದ ಮೇಲೆ ಕ್ಲಿಕ್ ಮಾಡಿ



ಸ್ಮೃತಿ

ಮಿಂಚಿನ ತರ ಒಮ್ಮೊಮ್ಮೆ ಪಟಕ್ ಅಂತ ಒಂದು ವಿಷಯ ಹೊಳೆದರೆ ಆತರದ್ದನ್ನ ಸ್ಮೃತಿ ಅನ್ನಬಹುದೇ ?
                                                                                                                                     -jay